ವ್ಯಾಸ ಸಂದರ್ಶನ

ಸಂಪ ಕೇಳಿದ್ದು; ವ್ಯಾಸ ಹೇಳಿದ್ದು

ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು? ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ. ಅಷ್ಟು ಕೆಲಸ ಅವರದ್ದು! ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಲ್ಲರಿಗೂ ಬೇಕಾಗುವಂತೆ ಆದವರು ಅವರು. ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡಿದ್ದಲ್ಲ; ಅವರೇ ಹೋಗಿ ಹೋಗಿ ಒಳಿತು ಮಾಡಿದವರು. ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸಿದ್ದಲ್ಲ; ಅವರೇ ಯೋಜಿಸಿ ಬರೆದರು. ‘ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ’ ಎಂಬ ವಿಶ್ವಹಿತದ ಭಾವ ಅವರದ್ದು. ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ.

ವ್ಯಾಸ ಸಂದರ್ಶನ

ಕುರುಕ್ಷೇತ್ರ

ಕ್ಷಣ ಕ್ಷಣದ ಮಾಹಿತಿ

ಹದಿನೆಂಟು ದಿನದ ಯುದ್ಧ. ಹದಿನೆಂಟು ಅಕ್ಷಹಿಣೀ ಸೈನ್ಯ. ಅತಿರಥ ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆ-ಕುದುರೆಗಳ ಲೆಕ್ಕವಿಲ್ಲ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.

ಕುರುಕ್ಷೇತ್ರ

ಕುಂತಿ-ಪಾಂಡು

ಅವಘಡವಾದ ಅವಕಾಶಗಳಲ್ಲೇ ಆದರ್ಶ ಮೆರೆದವರು

ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ.

ಕುಂತಿ-ಪಾಂಡು

ಸ್ಫೂರ್ತಿ ರಾಮಾಯಣ-2

ಅಯೋಧ್ಯಾ ಕಾಂಡ

ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ.

ಸ್ಫೂರ್ತಿ ರಾಮಾಯಣ-2

ಮಹಾಭಾರತ ಅನ್ವೇಷಣೆ

ನಿಮ್ಮ ಪ್ರಶ್ನೆ – ಸಂಪ ಉತ್ತರ

ಪ್ರಶ್ನೋತ್ತರಗಳ ರೂಪದಲ್ಲಿಯೇ ಉದಿಸಿದ ವ್ಯಾಸರ ಮಹಾಭಾರತದ ಮೇಲೆ ಅಂದಿನಿಂದ ಇಲ್ಲಿಯತನಕ ಹುಟ್ಟಿದ ಪ್ರಶ್ನೆಗಳು ಲೆಕ್ಕವಿಲ್ಲದಷ್ಟು. ಅದಕ್ಕೆ ಕಾರಣ ಮಹಾಭಾರತದ ಆಳ ಮತ್ತು ಅಗಲಗಳು. ಅದರ ಕುರಿತಾದ ಜಿಜ್ಞಾಸೆ ಹಾಗೂ ಅನ್ವೇಷಣೆಗಳು ಮುಗಿಯಲಾರದವುಗಳು. ಅಂಥದೇ ಒಂದು ಕಾರ್ಯ ‘ಮಹಾಭಾರತ ಅನ್ವೇಷಣೆ’.

ಮಹಾಭಾರತ ಅನ್ವೇಷಣೆ
ಬದುಕು ಬಹಳ ದೊಡ್ಡದು. ಅದೆಷ್ಟು ದೊಡ್ಡದು ಎನ್ನುವುದು ಗೊತ್ತಾಗಲು ಅಷ್ಟು ಬೆಳೆಯಬೇಕು. ಬೆಳೆಯದಿದ್ದರೆ ಇದ್ದಷ್ಟೇ ಬದುಕು. - ಮಹಾಭಾರತ ಅನ್ವೇಷಣೆ
ಕೆಲವು ಅವಮಾನಗಳನ್ನು ನುಂಗಬೇಕು. ಅಲ್ಲಿಯೇ ಮರೆಯಬೇಕು. ಬದುಕಿನ ಮುಂದಿನ ದಾರಿಯಲ್ಲೂ ಅದನ್ನು ಹೊತ್ತೊಯ್ದರೆ ಅದು ಕೆಡುಕೇ ಹೊರತು ಒಳಿತು ಮಾಡದು. - ಮಹಾಭಾರತ ಹೇಳಿಯೂ ಹೇಳದ್ದು
ಜೀವನ ಸುಖದ ಸೋಪಾನವಲ್ಲ. ದುಃಖವೂ ಅದರ ಸಂಗಾತಿಯೇ. ನೋವು ನಲಿವುಗಳೆರಡರ ಅನುಭವಕ್ಕೆಯೇ ಈ ಭವ ರೂಪುಗೊಂಡಿದ್ದು. ಪುಣ್ಯ-ಪಾಪಗಳ ಪರಿಣಾಮವೇ ಈ ಹುಟ್ಟು ತಾನೇ! - ಅಂದಿಗಷ್ಟು; ಇಂದಿಗಿಷ್ಟು
ಮನುಷ್ಯನನ್ನು ಸೋಲಿಸಬೇಕೆಂದರೆ ದೇವತೆಗಳು ಅವನ ಬುದ್ಧಿಯನ್ನು ಕೆಡಿಸುತ್ತಾರೆ. ಆಮೇಲೆ ಅವನಿಗೆ ಎಲ್ಲವೂ ಹಿಂದುಮುಂದಾಗಿ ಕಾಣತೊಡಗುತ್ತದೆ - ವಿದುರ
ತನ್ನೊಳಗಿನ ಕರೆಗೆ ಓಗೊಡುತ್ತಾನೆ ಕೃತಿಕಾರ. ಒಳಗಿಂದ ಹೊರಬಂದ ವಸ್ತುವಿಗೆ ವೈವಿಧ್ಯದುಡುಗೆ ತೊಡಿಸುತ್ತಾನೆ. ಪಾತ್ರಗಳನ್ನು ಪೋಷಿಸುತ್ತಾನೆ; ಸನ್ನಿವೇಶಗಳನ್ನು ಹೆಣೆಯುತ್ತಾನೆ; ಸಂದರ್ಭಗಳನ್ನು ಜೋಡಿಸುತ್ತಾನೆ. ಇಷ್ಟಾಗುವಾಗ ಕೃತಿ ಜನ್ಮ ತಾಳಿರುತ್ತದೆ. - ಹೂಬಾಣ

ಪುಸ್ತಕ ಪ್ರಪಂಚ

ವಿರಚಿತ ಕೃತಿಗಳು