ಕುರುಕ್ಷೇತ್ರ – ಕ್ಷಣ ಕ್ಷಣದ ಮಾಹಿತಿ 2
ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು.
ಅಲ್ಲಿ ಅಧ್ಯಾತ್ಮವಿದೆ, ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ, ಮಂತ್ರ ವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ!
ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ.
ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ ಇವೆಲ್ಲ ಅಲ್ಲಿವೆ, ಎಂದೇ, ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ ಒಳಿತಿದೆ, ಎಂದೇ.
ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.

