Yathiraj Veerambudhi
ಜಸ್ಟ್ 1 ಗಂಟೆ ಹೊತ್ತಗೆಗಳು ಧರ್ಮ ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ Sri Jagadisha Sharma Sampa ಈ ಹೊತ್ತಗೆಗೆ ಶ್ರೀ ಜಗದೀಶಶರ್ಮಾ ಸಂಪ ಅವರಿಗೆ ನಮನಗಳು. ಧರ್ಮ ಎನ್ನುವ ಶಬ್ದದ ಅರ್ಥ ಅಗಾಧ. ಆಂಗ್ಲದಲ್ಲಿ ಸರಳವಾಗಿ ರಿಲಿಜನ್ ಎಂದುಬಿಡುವರೇನೋ… ಧರ್ಮದ ದಶಮುಖಗಳನ್ನು ಓದುಗರ ಮುಂದೆ ಅನಾವರಣ ಮಾಡಿದ್ದಾರೆ ಶ್ರೀ ಸಂಪ. ಏನು ಮಾಡಬೇಕು, ಏನು ಮಾಡಕೂಡದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಲೇಖಕರು. ಇದರಲ್ಲಿರುವ ಬಹ್ವಂಶ ಕಥೆಗಳನ್ನು ಓದುತ್ತಿದ್ದಂತೆ, ‘ಅರೆರೆ! ಈ ಕಥೆ ನಮಗೆ ಚಿಕ್ಕಂದಿನಲ್ಲಿ ನೀತಿಪಾಠದ
Mahesha Araballi
2023/Dec/ಪುಸ್ತಕ-169 ಯಕ್ಷಪ್ರಶ್ನೆ – ಜಗದೀಶಶರ್ಮಾ ಸಂಪ Jagadisha Sharma Sampa ಡಿವೈನ್ ಡಾನ್ ಎಂದೇ ಪ್ರಸಿದ್ಧರಾದ ಜಗದೀಶಶರ್ಮಾ ಸಂಪರವರ “ಜಸ್ಟ್ 1 ಗಂಟೆಯ” ಸೀರೀಸಿನ ಕೃತಿ “ಯಕ್ಷಪ್ರಶ್ನೆ” ಆಸಕ್ತಿಕರವಾಗಿದೆ. ಜೀವಿಯನ್ನು ಮೇಲೆತ್ತುವುದು ಯಾವುದು? ಯಾವುದರಿಂದ ಬುದ್ಧಿವಂತನಾಗುವುದು? ಆಕಾಶಕ್ಕಿಂತ ಎತ್ತರ ಯಾವುದು? ನಿದ್ರೆಯಲ್ಲೂ ಎಚ್ಚರಿರುವುದು ಯಾರು? ಏನನ್ನು ಬಿಟ್ಟರೆ ಸುಖಿಯಾಗಬಹುದು? ಈ ಬಗೆಯ 64 ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸಿದ ಸಂದರ್ಭ, ಪೂರಕವಾದ ಉಪಕಥೆಗಳು ಹಾಗೂ ಝೆನ್ ಕಥೆಗಳು ಈ ಕೃತಿಯಲ್ಲಿವೆ.
Shridhar Saraf
ಸದ್ಗುಣ ಮತ್ತು ಸಾಮರ್ಥ್ಯಗಳು ಹೂವಿನ ಪರಿಮಳದಂತೆ. ಅವು ಇದ್ದರೆ ಸಾಕು,ಜನಕ್ಕೆ ತಾನಾಗಿ ತಿಳಿಯುತ್ತದೆ. ಈ ಪುಸ್ತಕದಲ್ಲಿಯ ಹೀಗೊಂದು ವಾಕ್ಯ ಶ್ರೀ Jagadisha Sharma ರ ಸದ್ಗುಣ ಮತ್ತು ಸಾಮರ್ಥ್ಯವನ್ನ ತಾನಾಗಿಯೇ ತಿಳಿಯುವಂತೆ ಮಾಡಿದ ಅನುಭವ ನನಗಾಯ್ತು. ಸಧ್ಯ ಓದುತ್ತಿರುವೆ.
Ravi Kantha
ಮಹಾಭಾರತದ ನೈಜ ನಾಯಕ ಎನ್ನಲಾದ ವಿದುರ ಅಲ್ಲಿ ಯಾರ ವಿರುದ್ದವೂ ತೊಡೆ ತಟ್ಟಲಿಲ್ಲ, ಅಸ್ತ್ರ ಹೂಡಲಿಲ್ಲ, ಶಸ್ತ್ರ ಹಿಡಿದು ಹೋರಾಡಲಿಲ್ಲ. ಆದರೆ ಮಹಾಭಾರತದುದ್ದಕ್ಕೂ ಆತ ನ್ಯಾಯ-ನೀತಿ ಪರವಾಗಿಯೇ ಇದ್ದ. ಅಷ್ಟೇ ಆಗಿದ್ದಿದ್ದರೆ ಆತ ಪ್ರಸ್ತುತ ಅನಿಸಿರುತ್ತಿರಲಿಲ್ಲವೇನೋ? ಆದರೆ ಆತ ಅಗತ್ಯ ಬಿದ್ದಾಗೆಲ್ಲ ಮಾತಾಡಿದ, ಏನು ಹೇಳಬೇಕಿತ್ತೋ ಅದನ್ನು ಹೇಳಿದ. ಹೇಳಬೇಕಾದ್ದನ್ನು ಹೇಳದೆ ಸುಮ್ಮನಿರಲಿಲ್ಲ. ಆತ ಹೇಳಿದ್ದನ್ನು ಮೊದಮೊದಲು ಒಪ್ಪದವರು ಕೊನೆಯಲ್ಲಾದರೂ ಒಪ್ಪಿದರು. ಕೊನೆಯವರೆಗೂ ಒಪ್ಪದವರು ಅನ್ಯಾಯವಾಗಿ ಸಾವನ್ನಪ್ಪಿದರು. ವಿದುರ ಎರಡೂ ಕಡೆಗೂ ಇದ್ದ, ಕೌರವ-ಪಾಂಡವರಿಬ್ಬರ ಜೊತೆಗೂ ಇದ್ದು
Naveena Krishna Bhat
ವಿದುರ – ಜಗದೀಶಶರ್ಮಾ ಸಂಪ ವ್ಯಾಸಋಷಿಪ್ರಣೀತ ಮಹಾಭಾರತದಲ್ಲಿ ಕಂಡುಬರುವ ವಿದುರನ ಪಾತ್ರ ಬಹು ವಿಶಿಷ್ಠವಾದದ್ದು. ಮಹಾಭಾರತ ಕಾಲದ ರಾಜನೀತಿಜ್ಞರಲ್ಲಿ ವಿದುರನನ್ನು ಮೀರಿಸಿದ ಮತ್ತೊಬ್ಬನಿರಲಿಲ್ಲ. ಹಾಗಾಗಿಯೇ ಆತ ಕುರುಕುಲದ ಆಸ್ಥಾನದಲ್ಲಿದ್ದ ಮಹಾ ಮೇಧಾವಿ ಹಾಗೂ ಅಪ್ರತಿಮ ಬುದ್ಧಿಶಾಲಿ. ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಮೃತ್ಯು ದೇವತೆ ಯಮನೇ ವಸುಂಧರೆಯಲ್ಲಿ ವಿದುರನಾಗಿ ಜನಿಸಿ ಕುರುಕುಲದ ಆಧಾರಸ್ತಂಭವಾಗುತ್ತಾನೆ. ಹಲವು ಸಂದರ್ಭಗಳಲ್ಲಿ ವಿದುರನ ವಿವೇಕ ತಣ್ಣೀರನ್ನೂ ತಣಿಸುತ್ತಿತ್ತು! ಇಂತಿಪ್ಪ ವಿದುರನ ಪಾತ್ರ ಚಿತ್ರಣವನ್ನು ಕಟ್ಟಿಕೊಡುವ ಹೊತ್ತಗೆಯೇ ಜಗದೀಶಶರ್ಮಾ ಸಂಪ ಅವರ ‘ವಿದುರ’. ಇಲ್ಲಿರುವುದು ನಾವೆಲ್ಲರೂ
ಮಹಾಭಾರತ ಅನ್ವೇಷಣೆ
ಬದುಕು ಬಹಳ ದೊಡ್ಡದು. ಅದೆಷ್ಟು ದೊಡ್ಡದು ಎನ್ನುವುದು ಗೊತ್ತಾಗಲು ಅಷ್ಟು ಬೆಳೆಯಬೇಕು. ಬೆಳೆಯದಿದ್ದರೆ ಇದ್ದಷ್ಟೇ ಬದುಕು.
ಮಹಾಭಾರತ ಅನ್ವೇಷಣೆ | Mahabharata Anveshane
ಪ್ರಶ್ನೋತ್ತರಗಳ ರೂಪದಲ್ಲಿಯೇ ಉದಿಸಿದ ವ್ಯಾಸರ ಮಹಾಭಾರತದ ಮೇಲೆ ಅಂದಿನಿಂದ ಇಲ್ಲಿಯತನಕ ಹುಟ್ಟಿದ ಪ್ರಶ್ನೆಗಳು ಲೆಕ್ಕವಿಲ್ಲದಷ್ಟು. ಅದಕ್ಕೆ ಕಾರಣ ಮಹಾಭಾರತದ ಆಳ ಮತ್ತು ಅಗಲಗಳು. ಅದರ ಕುರಿತಾದ ಜಿಜ್ಞಾಸೆ ಹಾಗೂ ಅನ್ವೇಷಣೆಗಳು ಮುಗಿಯಲಾರದವುಗಳು. ಅಂಥದೇ ಒಂದು ಕಾರ್ಯ ‘ಮಹಾಭಾರತ ಅನ್ವೇಷಣೆ’. ಲೋಹಿತ ಹೆಬ್ಬಾರ್
ಪೌರಾಣಿಕ ಕಥಾಗುಚ್ಛ | Pouranika Kathaguccha
ಪುರಾಣಗಳಲ್ಲಿ ಸ್ತ್ರೀಯರ ಕಥೆಗಳು ಬಹಳಷ್ಟಿದ್ದರೂ ಇನ್ನೂ ಅನೇಕ ಸ್ತ್ರೀಯರ ಚರಿತೆ ಜನಮಾನಸಕ್ಕೆ ತಿಳಿದಿಲ್ಲ. ಅತ್ಯದ್ಭುತ ವ್ಯಕ್ತಿತ್ವದ ಹಲವರು ಇಂದೂ ಮರೆಯಲ್ಲೇ ಇದ್ದಾರೆ. ಅಂತಹ ಹತ್ತು ಅಪರಿಚಿತ ಸ್ತ್ರೀಯರನ್ನು ‘ಪೌರಾಣಿಕ ಕಥಾಗುಚ್ಛ’ ಪರಿಚಯಿಸುತ್ತದೆ. ಒಂದೊಂದು ಕಥೆಗಳೂ ಹೆಣ್ತನದ ವೈಶಿಷ್ಟ್ಯವನ್ನು ಹೇಳುವಂಥವೇ ಆಗಿವೆ. ಪುರಾಣಸ್ತ್ರೀಯರ ಬಗೆಗೆ ಗೌರವದ ಭಾವವನ್ನು ಮೂಡಿಸುವ ಕೃತಿ ‘ಪೌರಾಣಿಕ ಕಥಾಗುಚ್ಛ’. ಲೋಹಿತ ಹೆಬ್ಬಾರ್
ಧರ್ಮ | Dharma
ಧರ್ಮ ಎಂದರೇನು ಎಂದು ಯಾರನ್ನಾದರೂ ಕೇಳಿದರೆ ಒಬ್ಬೊಬ್ಬರದು ಒಂದೊಂದು ಉತ್ತರ ಬಂದೀತು. ಯಾವುದು ಧರ್ಮ ಎಂದು ಗೊತ್ತಾಗದೇ ಗೊಂದಲ ಹಾಗೆಯೇ ಉಳಿದೀತು. ಆದರೆ, ‘ಧರ್ಮ’ ಪುಸ್ತಕವು ಧರ್ಮದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ನೀಡುತ್ತದೆ. ಪುಸ್ತವನ್ನು ಹಿಡಿದು ಧರ್ಮವೆಂದರೇನು ಎಂದು ಕೇಳಿದರೆ, ಅದು ಹೀಗೆ ಹೇಳುತ್ತದೆ: ಧರ್ಮ ಎಂದರೆ? -ಕಲಿಯುವುದು. ಧರ್ಮ ಎಂದರೆ? -ಸತ್ಯವಾಡುವುದು. ಧರ್ಮ ಎಂದರೆ? -ಕದಿಯದಿರುವುದು. ಧರ್ಮ ಎಂದರೆ? -ವಿವೇಕಿಯಾಗಿರುವುದು. ಧರ್ಮ ಎಂದರೆ? -ದ್ವೇಷ ಮಾಡದಿರುವುದು. ಧರ್ಮ ಎಂದರೆ? -ಎಲ್ಲರನ್ನೂ ಎಲ್ಲವನ್ನೂ ಸಹಿಸುವುದು. ಧರ್ಮ ಎಂದರೆ?
ಚಾಣಕ್ಯ | Chanakya
ಚಾಣಕ್ಯನೆಂದರೆ ಭವ್ಯ ಇತಿಹಾಸ, ವರ್ತಮಾನ, ಭವಿಷ್ಯ ಕೂಡ. ಆತನ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳು ರಾಜ್ಯಾಡಳಿತಕ್ಕೆ ಮಾತ್ರವಲ್ಲ ಸಾಮಾನ್ಯ ಮಾನವನಿಗೂ ಬೇಕಾಗುವಂಥವು. ‘ಚಾಣಕ್ಯ’ ಪುಸ್ತಕ ಆತ ರಚಿಸಿದ ನೀತಿಶಾಸ್ತ್ರವನ್ನು ಎಳೆ ಎಳೆಯಾಗಿ ಬಿಡಿಸಿದೆ. ಸುಖವು ಎಲ್ಲರಿಗೂ ಬೇಕು. ಆದರೆ ಸುಖದ ಮೂಲ ಯಾವುದು ಎಂದರೆ ಧರ್ಮ ಎಂದು ಆರಂಭಿಸುತ್ತ ಚಾಣಕ್ಯ ಒಂದೊಂದೆ ಸೋಪಾನವನ್ನು ಏರಿಸುತ್ತಾನೆ. ಸುಖಕ್ಕೆ ಧರ್ಮವು ಮೂಲ. ಧರ್ಮಕ್ಕೆ ಅರ್ಥವು ಮೂಲ. ಅರ್ಥಕ್ಕೆ ದೇಶವು ಮೂಲ. ರಾಜ್ಯಕ್ಕೆ ಇಂದ್ರಿಯಗಳ ಸಂಯಮ ಮೂಲ. ಇಂದ್ರಿಯಸಂಯಮಗಳ ಮೂಲ ವಿನಯ. ವಿನಯದ
ಆತ್ಮಗುಣ | Atmaguna
‘ಯಾರು ನೀನು?’ ಎಂದು ಪರಿಚಯ ಕೇಳಿದರೆ- ‘ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ; ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ; ನಾನೆಂದರೆ ದಾನಶೀಲ’ ಎಂದೆಲ್ಲ ಪರಿಚಯ ಹೇಳಬೇಕು ಎನ್ನುತ್ತಾರೆ ಋಷಿಗಳು. ಅದೇ ಈ ಪುಸ್ತಕ.
ಯಕ್ಷಪ್ರಶ್ನೆ | Yaksha Prashne
ಯಕ್ಷಪ್ರಶ್ನೆ ಮಹಾಭಾರತದ ವನಪರ್ವದಲ್ಲಿ ಅಂತ್ಯದಲ್ಲಿ ಬರುವ ರೋಮಾಂಚಕಾರಿ ಘಟ್ಟ. ಯಕ್ಷನ ಪಶ್ನೆಗೆ ಉತ್ತರಿಸದೇ ಸರೋವರದ ತಟದಲ್ಲಿ ನೀರು ಕುಡಿದು ಸತ್ತು ಬಿದ್ದ ನಾಲ್ವರು ತಮ್ಮಂದಿರನ್ನು ಧರ್ಮರಾಜ ಉತ್ತರಿಸಿ ಬದುಕಿಸಿಕೊಂಡ ಸಂದರ್ಭ. ಆ ಯಕ್ಷಪ್ರಶ್ನೆಯ ಕುರಿತಾದ ಈ ಕೃತಿ ಅದರ ವ್ಯಾಖ್ಯಾನದಂತೆ ಇದೆ. ವಿಶೇಷವೆಂದರೆ ಇದರಲ್ಲಿ ಧರ್ಮರಾಯನ ಉತ್ತರಕ್ಕೆ ಹೊಂದುವ ಹಲವು ಕಥೆಗಳನ್ನು ಜೋಡಿಸಿದೆ.