ಕಲಿಸದೇ ಕಲಿಸುವ 24 ಗುರುಗಳು | Kalisade Kalisuva 24 Gurugalu
ಕಲಿಕೆ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿಯುವುದಲ್ಲ. ಅದರಿಂದ ಆಚೆಗೆ ಇರುವುದನ್ನು ತಿಳಿಯುವುದು ಕಲಿಕೆ. ಪ್ರಕೃತಿಯೇ ಮನುಷ್ಯನಿಗೆ ಸಿಲೆಬಸ್. ಅಲ್ಲಿಂದ ನಿತ್ಯ ಕಲಿಯುತ್ತಾನೆ ಮತ್ತು ಅದನ್ನು ಮರೆಯುವುದಿಲ್ಲ. ಈ ಕೃತಿ ಪ್ರಕೃತಿಯಲ್ಲಿ ಏನನ್ನು ನೋಡಿ ಏನೇನನ್ನು ಕಲಿಯಬಹುದು ಎನ್ನುವುದನ್ನು ತೋರಿಸುತ್ತದೆ. ಎಲ್ಲವನ್ನೂ ಬಿಟ್ಟ ಅವಧೂತ ಪ್ರಕೃತಿಯ ೨೪ ವಸ್ತುಗಳಿಂದ, ಜೀವಿಗಳಿಂದ ಸುಖದ ಬದುಕಿಗೆ ಬೇಕಾದ ಅಂಶಗಳನ್ನು ಹೇಗೆಲ್ಲ ಪಡೆದ ಎನ್ನುವುದೇ ಈ ಕೃತಿಯ ವಿಶೇಷ. ಈ ಕಿರು ಹೊತ್ತಗೆ ಓದಿ ಮುಗಿಸುವ ಹೊತ್ತಿಗೆ ನೀವು ಕಲಿಯುತ್ತೀರಿ.
ಭಗವದ್ಗೀತೆ | Bhagavdgeete
ಪ್ರತಿಯೊಬ್ಬರ ಬದುಕಿಗೂ ಬೇಕಾಗಿರುವ ಗ್ರಂಥ ಭಗವದ್ಗೀತೆ. ಭವದ ಬೇಗುದಿಯನ್ನು ಶಮನ ಮಾಡುವ ಮಹಾಗ್ರಂಥ. ಇಲ್ಲಿ ಅದನ್ನು ಪುಟ್ಟ ಪುಸ್ತಕದಲ್ಲಿ ವಿವರಿಸಲಾಗಿದೆ. ಅಂಗೈಯಷ್ಟಗಲದ ಈ ಕೃತಿ ಹೇಳುವುದೇನನ್ನು ಎಂದರೆ… ಜಗತ್ತಿಗೂ ವ್ಯಕ್ತಿಗೂ ಇರುವ ಸಂಬಂಧವನ್ನು ವಿಶದಪಡಿಸುತ್ತದೆ. ವ್ಯಕ್ತಿ ಅಸೀಮವಾಗುವುದನ್ನು ಹೇಳಿಕೊಡುತ್ತದೆ. ಯಶಸ್ಸಿನ ಮಹಾಮಂತ್ರವನ್ನು ಉಪದೇಶಿಸುತ್ತದೆ. ಮಂಡಿಯೂರಿ, ತಲೆ ತಗ್ಗಿಸಿ, ಉಸಿರುಗಟ್ಟಿ, ಕೈ ಚೆಲ್ಲಿ ಕುಳಿತ ಅರ್ಜುನನಿಗೆ ಪ್ರಚೋದನೆಯನ್ನು ಕೊಟ್ಟ ಗೀತೆ. ಬದುಕಿನ ಎಷ್ಟೋ ಸಂಕಟಗಳನ್ನು ಎದುರಿಸುವವರಿಗೆ ಇದು ಸುಖದ ಗೀತೆಯೂ ಆಗಿದೆ. ಬದುಕು ಹೇಗೆ ಸಹಜವೋ ಸಾವೂ ಅಷ್ಟೇ
ದಶಕಂಠ ರಾವಣ | Dashakanta Ravana
ಅವನು ಬ್ರಹ್ಮನ ಮರಿಮಗ. ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ. ಬಲಿಷ್ಠ-ಸಮರ್ಥ-ಪರಾಕ್ರಮಿ. ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ. ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು. ಒಂದು ವರ; ಒಂದು ತಪ್ಪು ಒಂದು ತಪ್ಪು; ಒಂದು ಶಾಪ ಮತ್ತೊಂದು ವರ; ಮತ್ತೊಂದು ತಪ್ಪು ಮತ್ತೊಂದು ತಪ್ಪು; ಮತ್ತೊಂದು ಶಾಪ ಹೀಗೆ ಸಾಗಿತು ಅವನ ಬದುಕು. ಏಕಾಯಿತು? ಏನಾಯಿತು? ತ್ರಿಭುವನ ತಲ್ಲಣನ ಇತಿವೃತ್ತ ಮೂಲಕ್ಕೆ ನಿಷ್ಠವಾದ ನಿರೂಪಣೆ ಅದೇ ದಶಕಂಠ ರಾವಣ
ಸ್ಫೂರ್ತಿ ರಾಮಾಯಣ-೧, ಬಾಲಕಾಂಡ | SPOORTI RAMAYANA-1: BAALA KAANDA
ರಾಮಾಯಣವೆಂದರೆ ಸ್ಫೂರ್ತಿಯ ದೇವಗಂಗೆ, ಪ್ರೇರಣೆಯ ಕಾಮಧೇನು, ಆಪ್ತ ಸಲಹೆಯ ಕಲ್ಪವೃಕ್ಷ. ಅಲ್ಲಿ ಎಲ್ಲಿ ಮುಟ್ಟಿದರೂ ಬದುಕಿನ ಬುತ್ತಿ ಲಭ್ಯ. ಸಹಸ್ರ-ಸಹಸ್ರ ಸಂವತ್ಸರಗಳಿಂದ ಅದು ಮನುಷ್ಯಜೀವನವನ್ನು ಪ್ರಭಾವಿಸಿದ್ದು ಇದೇ ಕಾರಣಕ್ಕೆ. *** ಬಾಲ್ಯವೆಂದರೆ ಬದುಕಿನ ಬುನಾದಿ. ಬಾಲ್ಯವೆಂಬ ಬೇರಿನ ಮೇಲೆಯೇ ಬದುಕಿನ ವೃಕ್ಷದ ಅಸ್ತಿತ್ವ. ರಾಮಾಯಣದ ಬಾಲ್ಯ, ರಾಮನ ಬಾಲ್ಯ ಎರಡೂ ಆಗಿರುವ ಬಾಲಕಾಂಡ, ನಮ್ಮ ಬದುಕಿನ ಬೇರಿಗೆ ಎರೆಯುವ ನೀರು ಜೀವದ್ರಸ. *** ಇಲ್ಲಿದೆ ಆ ಅಮೃತದ ಕೆಲವು ಹನಿಗಳು. ಅಮೃತದ ಹನಿಯೂ ಸಾಕು ಬದುಕಿನ ವಿಷ
ಕಥೆ ಬೇಕೇನ್ರೀ ಕಥೆ? | Kathe Bekenri Kathe
ಕಥೆ ಬೇಕೇನ್ರೀ ಕಥೆ? ಇದು ನಲವತ್ತಾರು ಕಥೆಗಳ ಸಂಕಲನ. ಇದರಲ್ಲಿ ಮೂರು ಭಾಗಗಳಿವೆ. ಮೊದಲ ಭಾಗ – ‘ಮನುಷ್ಯ ಜಗತ್ತು’. ಮನುಷ್ಯನಂತೆ ವರ್ತಿಸುವ ಪ್ರಾಣಿಗಳ ಕಥೆಗಳಿರುವ ಭಾಗವಿದು. ಎರಡನೆಯ ಭಾಗ ‘ಪ್ರಾಣಿ ಪ್ರಪಂಚ’. ಪ್ರಾಣಿಗಳಂತಾಡುವ ಮನುಷ್ಯರ ಕಥೆಗಳು ಇಲ್ಲಿವೆ. ಮೂರನೆಯ ಭಾಗ – ‘ಮೂರ್ಖರ ಸಂತೆ’. ಮೂರ್ಖತನದ ಪರಮಾವಧಿಯ ಕಥೆಗಳು ಇಲ್ಲಿವೆ. ಈ ಕೃತಿ ಪ್ರಾಚೀನ ಕಥಾಸರಿತ್ಸಾಗರದ ಪುನರವತರಣ. ಅಲ್ಲಿಂದ ಆಯ್ದ ಹನಿಗಳು ಇಲ್ಲಿವೆ. ಇದು ಅನುವಾದವಲ್ಲ. ಕಥಾಸರಿತ್ಸಾಗರದ ಕಥೆಗಳ ಪುನಾರೂಣೆ – ಅವುಗಳ ಆಧುನಿಕ ಪರಿವೇಷ.
ವಿದುರ | VIDURA
ವಿದುರನೆಂದರೆ: ಪ್ರಭುತ್ವಕ್ಕೆ ನಿಷ್ಠನಾಗಿದ್ದೂ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ; ವ್ಯವಸ್ಥೆ ಹಾಳಾಗಿದೆಯೆಂದು ಅದನ್ನು ನಿರಾಕರಿಸದೆ, ಸರಿಪಡಿಸುವ ಪ್ರಬುದ್ಧತೆ; ವ್ಯಕ್ತಿಗೌರವವನ್ನು ಕಳೆದುಕೊಳ್ಳದೆಯೇ ಆ ವ್ಯಕ್ತಿಯ ತಪ್ಪನ್ನು ಹೇಳುವ ಸಹನಶೀಲತೆ; ತನ್ನವರೆನ್ನುವ ಅದಮ್ಯ ಪ್ರೀತಿಯನ್ನಿಟ್ಟುಕೊಂಡೂ ಲೋಕವಿರೋಧಿಯಾದಾಗ ಪರಿತ್ಯಾಗ ಮಾಡುವ ಮೋಹರಹಿತತೆ; ಬಲ, ಹಣ, ಪ್ರಭಾವ ಯಾವುದಕ್ಕೂ ಬಗ್ಗದ – ಜಗ್ಗದ ನ್ಯಾಯನಿಷ್ಠುರತೆ. ವಿದುರನೆಂದರೆ: ಲೋಕಹಿತೈಷಿ; ದೇಶನಿಷ್ಠ; ಕುಟುಂಬಪ್ರೇಮಿ; ಪ್ರಜಾರಕ್ಷಕ; ಸಿದ್ಧ-ಬುದ್ಧ-ಪ್ರಬುದ್ಧ; ಸಹಿಷ್ಣು; ನ್ಯಾಯತತ್ಪರ; ಸತ್ಯವಾದಿ; ಧೀರ; ಮಾರ್ಗದರ್ಶಿ; ರಾಜನೀತಿವಿಶಾರದ; ಶಾಸ್ತ್ರಜ್ಞ; ಧೀಮಂತ; ನಿರ್ಮೋಹಿ; ತ್ಯಾಗಿ; ವಿರಾಗಿ. ವಿದುರನ ಈ ಅದ್ಭುತ
ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು | Bheeshma Helida Management Kathegalu
ಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದು ದೇವಮಾನದ ಆಯುಷ್ಯ. ಅದೂ ಮೇಲಿನ ಲೋಕದಲ್ಲಿ. ಒಟ್ಟಿನಲ್ಲಿ ಅವನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಕಾಲ ಲೋಕಲೋಕಾಂತರದ ಬದುಕನ್ನು ಅನುಭವಿಸಿದ್ದ. ಅವನು ಕಲಿತದ್ದಂತೂ ಯುಗಯುಗಗಳ ಕಾಲ ಜಗತ್ತಿಗೆ ಕಲಿಸಿದವರಲ್ಲಿ. ಒಡನಾಡಿದ್ದು, ಗುದ್ದಾಡಿದ್ದು ಯಾವುದೂ ಸಾಮಾನ್ಯರ ಜೊತೆಯಲ್ಲ. ಅಂತವನು ಕ್ಷಣಕ್ಷಣವೂ ಚುಚ್ಚುವ ಬಾಣಗಳ ಮೇಲೆ ಸಾವನ್ನು ಕಾಯುತ್ತಾ ಮಲಗಿದ್ದ. ಆಗ ಅವನಲ್ಲಿ ಮುಂದಿನ ಸಾರ್ವಭೌಮ ಆಡಳಿತದ ಮಾರ್ಗದರ್ಶನ ಕೇಳಿದ. ***
ಪದಪಥ | Pada Patha
ಒಂದೊಂದು ಪದಕ್ಕೆ ಒಂದೊಂದು ಕಥೆ ಇರುತ್ತದೆ. ಅದೇ ಭಾಷೆಯ ವೈಶಿಷ್ಟ್ಯ. ಸಾಧಾರಣವೆನಿಸುವ ಮಾತಿನಲ್ಲಿ ಬಳಸುವ ಪದಗಳು ನಮ್ಮನ್ನು ಯಾವುದೋ ಕಾಲಕ್ಕೆ, ಲೋಕಕ್ಕೆ ಕರೆದುಕೊಂಡು ಹೋಗಿಬರುವ ಸಾಮರ್ಥ್ಯವನ್ನು ಹೊಂದಿವೆ. ನಾವಾಡುವ ಮಾತುಗಳಲ್ಲಿ ಎಷ್ಟೋ ಪದಗಳು ನಮಗೆ ಅಪರಿಚಿತವೇ. ಅವುಗಳ ಹುಟ್ಟು, ಬೆಳವಣಿಗೆ, ಸಮಯ, ಸಂದರ್ಭ ಇದಾವುದೂ ಗೊತ್ತೇ ಇರುವುದಿಲ್ಲ. ಯಾರೋ ಬಳಸಿದ್ದನ್ನು ಕೇಳಿಸಿಕೊಂಡು, ಮತ್ತಾವುದೋ ಸಂದರ್ಭದಲ್ಲಿ ಅದನ್ನು ಪ್ರಯೋಗಿಸುತ್ತೇವೆ. ಅದು ಸರಿಯೋ ತಪ್ಪೋ ಎನ್ನುವ ಅರಿವೂ ಕಡಿಮೆಯೇ. ಆಗಾಗ ಮಾತಿನಲ್ಲಿ ಬಳಸುವ ‘ಭಗೀರಥ ಪ್ರಯತ್ನ’ ಎನ್ನುವ ಪದವು ತ್ರೇತಾಯುಗದ
ಮಹಾಭಾರತ ಹೇಳಿಯೂ ಹೇಳದ್ದು
ಕೆಲವು ಅವಮಾನಗಳನ್ನು ನುಂಗಬೇಕು. ಅಲ್ಲಿಯೇ ಮರೆಯಬೇಕು. ಬದುಕಿನ ಮುಂದಿನ ದಾರಿಯಲ್ಲೂ ಅದನ್ನು ಹೊತ್ತೊಯ್ದರೆ ಅದು ಕೆಡುಕೇ ಹೊರತು ಒಳಿತು ಮಾಡದು.
ಕಥೆಯೆಲ್ಲ ಜೀವನ | Katheyella Jeevana
‘ಕಥೆಯೆಲ್ಲ ಜೀವನ’ ಕಥೆ ಮತ್ತು ಬದುಕಿನ ಈ ತಾದಾತ್ಮ್ಯದ ಅಭಿವ್ಯಕ್ತಿ. ಯಾವುದೋ ಕಥೆಯಲ್ಲಿ ನಮ್ಮ ಬದುಕಿರಬಹುದು ಅಥವಾ ನಮ್ಮ ಬದುಕೇ ಕಥೆಯೂ ಆಗಿರಬಹುದು. ಕಥಾಸರಿತ್ಸಾಗರ ಈ ಕೃತಿಗೆ ಆಧಾರ. ಸೋಮದೇವನ ಆ ಕೃತಿ ಅನುಪಮತೆಯ ಮೇರು. ಅದು ನಿಜವಾದ ಅರ್ಥದ ಕಥೆಗಳ ಸಾಗರ. ಬದುಕಿನ ಸ್ಫೂರ್ತಿಯ ಆಗರವೂ ಹೌದು. ಕ್ರಿಸ್ತಶಕ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದ ಕವಿ ಕ್ಷೇಮೇಂದ್ರ ಸಂಸ್ಕೃತ ಭಾಷೆಯಲ್ಲಿ ಅದನ್ನು ಮತ್ತೆ ರಚಿಸಿದ. ಅದಕ್ಕೆ ಬೃಹತ್ಕಥಾಮಂಜರಿ ಎಂದು ಹೆಸರಿಟ್ಟ. ಆಗ ಕಾಶ್ಮೀರವನ್ನು ಆಳುತ್ತಿದ್ದುದು ಅನಂತರಾಜ. ಅವನ
ಹೂಬಾಣ | Hoobana
ಕೃತಿ ರಚನೆ ಒಂದು ಅಸಾಧಾರಣ ಸಾಧನೆ. ಅದು ಸುಲಭಸಾಧ್ಯವಲ್ಲ. ಅದರಲ್ಲೂ ಕೃತಿಯೊಂದನ್ನು ರಸಮಯವಾಗಿ ರೂಪಗೊಳಿಸುವುದು ಇನ್ನಷ್ಟು ಪ್ರತಿಭೆ – ತಜ್ಞತೆಗಳನ್ನು ಅಪೇಕ್ಷಿಸುತ್ತದೆ. ಕೃತಿಯಿದು ಈ ಕುರಿತಾದ ಬರಹಗಳನ್ನು ಒಳಗೊಂಡಿದೆ. ಸಾಹಿತ್ಯದ ವಿಶಿಷ್ಟ ತಜ್ಞತೆಯಿರುವ ಪೂರ್ವಸೂರಿಗಳು ಈ ಕುರಿತು ಏನೆಂದಿದ್ದಾರೆ ಎನ್ನುವುದನ್ನು ಇಲ್ಲಿ ನಿರೂಪಿಸಲಾಗಿದೆ. ಹಾಗೆಂದು ಇದು ಆ ವಿಷಯದ ಸಮಗ್ರ ಕೃತಿಯೇನೂ ಅಲ್ಲ. ಒಂದಿಷ್ಟು ಅಂಶಗಳಿವೆ ಇಲ್ಲಿ ಅಷ್ಟೇ.
Mahabharata HeLiyoo HeLaddu
‘ಮಹಾಭಾರತ’ ಎಂದಿಗೂ ಸಾಕೆನಿಸದ ಕಥಾನಕ. ‘ಇತಿಹಾಸ’ ಎಂದೇ ಸಾಂಪ್ರದಾಯಿಕರಿಂದ ಕರೆಸಿಕೊಂಡ ಈ ಕೃತಿ ಅನನ್ಯ. ಅನನ್ಯತೆಗೆ ಹವು ಕಾರಣಗಳು. ಅದರಲ್ಲಿ ಒಂದು – ಇದರ ಹೇಳಿಯೂ ಹೇಳದ ಅಂಶ. ಅಂತಹ ಅಂಶಗಳನ್ನು ಹುಡುಕಲು ಹೊರಟ ಪ್ರಯತ್ನವೇ ಈ ಕೃತಿ. ಮಹಾಭಾರತ ಹೇಳುವ ಕರ್ಮಸಿದ್ಧಾಂತ ಈ ಕೃತಿಯ ತಿರುಳು. ನಮ್ಮ ಬದುಕಿನ ಉನ್ನತಿಗೂ-ಅವನತಿಗೂ ನಾವೇ ಕಾರಣ. ಇದನ್ನು ಮಹಾಭಾರತ ಹೇಳಿದ ಬಗೆಯ ನಿಷ್ಕರ್ಷೆ ಇಲ್ಲಿದೆ. ಮೊದಲು ನಾವು ನಮ್ಮ ಹಾದಿಯ ಬೆಳಕ ಅರಸಬೇಕು; ಅನಂತರ ನಾವೇ ಬೆಳಕಾಗಬೇಕು. ಇಷ್ಟೇ