ಕಥಾಸರಸಿ | Kathāsarasi
ಸಾವಿರ ಸಾವಿರ ವರ್ಷಗಳ ಪರಂಪರೆ ಕಥೆಗಳ ಮೂಲಕ ಬದುಕನ್ನು ಹುಡುಕಿದೆ, ಕಂಡ ಬದುಕನ್ನು ಕಾಣದವರಿಗೆ ಬೋಧಿಸಿದೆ. ಈ ಕಾರಣಕ್ಕಾಗಿಯೇ ಕಥೆ ಆ ದೇಶ ಈ ದೇಶ ಎಂದಿಲ್ಲದೆ, ಆ ಕಾಲ ಈ ಕಾಲ ಎಂದಿಲ್ಲದೆ ಬದುಕಿನ ಮುಖ್ಯ ಸ್ಥಾನವನ್ನು ಆವರಿಸಿದೆ. ಇದನ್ನೇ ಕವಿ ನುಡಿ ‘ವ್ಯಥೆಗಳ ಕಳೆಯುವ ಕಥೆಗಾರ; ನಿನ್ನ ಕಲೆಗೆ ಯಾವುದು ಭಾರ’ ಎಂದು ಹಾಡಿ ಹೊಗಳಿದ್ದು. ಭಾರತದ ಕಥೆಗಳ ಮುಖ್ಯ ಆಧಾರಗಳಲ್ಲಿ ಬೃಹತ್ಕಥೆಯೂ ಒಂದು. ಅದರ ಮತ್ತೊಂದು ರೂಪವೇ ಸೋಮದೇವ ಭಟ್ಟನ ಕಥಾಸರಿತ್ಸಾಗರ.
ಅಂದಿಗಷ್ಟು ಇಂದಿಗಿಷ್ಟು | Andigaṣṭu Indigiṣṭu
ಇದು ಧರ್ಮಭಾರತಿಯ ಓದುಗರನ್ನು ಹದಿನೈದು ವರ್ಷಗಳ ಕಾಲ ಪ್ರತಿತಿಂಗಳೂ ಕಾಯುವಂತೆ ಮಾಡಿದ್ದ ವಿದ್ವಾನ್ ಜಗದೀಶ ಶರ್ಮರ ಸಂಪಾದಕೀಯ ಬರಹಗಳ ಸಂಗ್ರಹ. ಹದಿನೈದು ವರ್ಷಗಳಷ್ಟು ದೀರ್ಘಕಾಲದಲ್ಲಿ ಬರೆದ ಬರಹಗಳಾದರೂ ಇಲ್ಲಿಯ ಲೇಖನಗಳಲ್ಲಿ ನಿಖರವಾದ ನಿಲುವಿದೆ. ಮೊದಲನೇ ಬರಹ ಹೇಳಿದ್ದೊಂದಾದರೆ ಕಡೆಯದ್ದು ಹೇಳಿದ್ದು ಇನ್ನೊಂದು ಎಂಬಂತಾಗಿಲ್ಲ. ವಿಷಯಗಳ ಆಯ್ಕೆಯ ಹಂದರವಂತೂ ‘ಅಬ್ಬಾ’ ಎನ್ನುವಂತಿದೆ. ಲಾಲಿತ್ಯಪೂರ್ಣ ಭಾಷೆ, ಗಂಭೀರ ನಿರೂಪಣೆ, ಸದ್ಧರ್ಮವನ್ನು ಸಾರಬೇಕೆಂಬ ಅದಮ್ಯ ತುಡಿತ; ಅಂತರ್ಗತ ಜೀವಪರ ಕಾಳಜಿ, ಗುರುವಿತ್ತ ವಿಷಯವನ್ನು ಕುಂದಿಲ್ಲದೇ ಶಬ್ದಗಳಲ್ಲಿಡುವ ಕುಶಲತೆ ಇವೆಲ್ಲವೂ ಈ ಪುಸ್ತಕವನ್ನು
ಸಪ್ನ ಬುಕ್ ಹೌಸ್ ಕಾರ್ಯಕ್ರಮದಲ್ಲಿ
ಸಪ್ನ ಬುಕ್ ಹೌಸ್ ಕಾರ್ಯಕ್ರಮದಲ್ಲಿ. ನಿರ್ದೇಶಕ ಗಿರೀಶ್ ಕಾಸರವಳ್ಳಿ, ಲೇಖಕ ಜೋಗಿ, ಕವಿ ಸಿದ್ದಲಿಂಗಯ್ಯ, ಕಥೆಗಾರ ಗೋಪಾಲಕೃಷ್ಣ ಕುಂಟಿನಿ, ನಟಿ ರಂಜನಿ ರಾಘವನ್, ಲೇಖಕ ವಿಕಾಸ್ ನೇಗಿಲೋಣಿ, ಲೇಖಕಿ ಮೇಘನಾ ಸುಧೀಂದ್ರ , ಸಪ್ನ ಬುಕ್ ನ ನಿತಿನ್ ಶಾ ಮತ್ತಿತರರ ಜೊತೆ.
Mahesha Araballi
2023/Dec/ಪುಸ್ತಕ-176 ಚಾಣಕ್ಯ ಹೇಳೋದನ್ನ ಕೇಳಿ – ಜಗದೀಶಶರ್ಮಾ ಸಂಪ Jagadisha Sharma Sampa ಚಾಣಕ್ಯ ನೀತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಕೈಪಿಡಿ ಮಾದರಿಯ ಈ ಪುಸ್ತಕವನ್ನು ಆಗಾಗ ಮೆಲುಕು ಹಾಕುತ್ತಿರಬಹುದು. ಕೆಲವು ವಿವರಗಳು ಹೀಗಿವೆ: – ಬಾಲಿಶರು ಕೆಲಸ ಕೆಟ್ಟರೆ ದೋಷಾರೋಪ ಮಾಡುತ್ತಾರೆ – ಅತಿ ಆಸೆ ಬುದ್ಧಿಯನ್ನು ಮುಚ್ಚುತ್ತದೆ – ಹೆದರುವವಗೆ ಕಾರ್ಯದ ಯೋಚನೆ ವ್ಯರ್ಥ – ಕೃತಜ್ಞನಲ್ಲದವನಿಗೆ ನರಕದಿಂದ ಬಿಡುಗಡೆಯಿಲ್ಲ – ಸುಖಕ್ಕೆ ಧರ್ಮವು ಮೂಲ – ಅರ್ಥಕ್ಕೆ ದೇಶವು ಮೂಲ
ಗುರುರಾಜ ಕೊಡ್ಕಣಿ
ತೀರ ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಜಮೀಲ್ ಸರ್ ಸಿಕ್ಕಿದ್ದರು. ಮಾತಿನ ನಡುವೆ ‘ ಇನ್ನಷ್ಟು ಹೊಸ ಓದುಗರನ್ನ ಕನ್ನಡಕ್ಕೆ ಸೆಳೆಯುವ ಪ್ರಯತ್ನಕ್ಕೆ ಹೊಸದೊಂದು ಯೋಜನೆ ನಿರೂಪಿಸಿದ್ದೀನಿ ಸರ್ ‘ ಎಂದಿದ್ದರು. ಅಂಥದ್ದೇನು ಯೋಜನೆ ಎಂದು ಕುತೂಹಲದಲ್ಲಿದ್ದವನಿಗೆ ಅವರು ತೋರಿಸಿದ್ದು ತಮ್ಮ ಮೊಬೈಲ್ ಪೋನಿನಲ್ಲಿದ್ದ Jagadisha Sharma Sampa ಪುಸ್ತಕದ ಮುಖಪಟಗಳ ಚಿತ್ರ. ‘ ಜಸ್ಟ್ 1 ಗಂಟೆ’ ಎಂಬ ಸರಣಿಯಡಿ ಪ್ರಕಟವಾಗಿರುವ ಆರು ಪುಸ್ತಕಗಳಿವು. ‘ಧರ್ಮ’ ‘ಚಾಣಕ್ಯ’ ‘ಭಗವದ್ಗೀತೆ’ ’24 ಗುರುಗಳು ‘ ‘ಯಕ್ಷಪ್ರಶ್ನೆ’ ‘ ಆತ್ಮಗುಣ’
Sachin LS
ಪ್ರೀತಿಯ Jagadisha Sharma Sampa , ಇಡೀ ಜಗತ್ತು ಇದೇ ಧರ್ಮ ಎಂದು ಹೇಳುತ್ತ ಧರ್ಮದ ಕುರಿತು ಮಾಹಿತಿ ಸಾರುವ, ಧರ್ಮದ ಹೆಸರಿನಲ್ಲಿ ಸಮಾಜ ಹೊತ್ತಿ ಉರಿಯುವ ಈ ಸಮಯದಲ್ಲಿ ತಣ್ಣಗೆ ನಿಜ ಧರ್ಮದ ಅರಿವನ್ನು ಮೂಡಿಸಹೊರಟ ಕೃತಿಯಿದು. ಒಂದು ಗಂಟೆಯಲ್ಲಿ ಇಡಿಯ ಜನ್ಮಕ್ಕೆ ಬೇಕಾಗುವಷ್ಟು ಕಲಿಯುವ ಸರಕನ್ನು ನೀಡಿರುವ ಪುಸ್ತಕವಿದು. ಧರ್ಮದ ಹತ್ತು ಮೆಟ್ಟಿಲುಗಳನ್ನು ಕಟ್ಟಿಕೊಟ್ಟು, ನಾವೂ ಧರ್ಮವಂತರಾಗಬಹುದಾದ ದಾರಿಯನ್ನು ತೆರೆದಿಟ್ಟಿದ್ದಾರೆ. ಪುಟ್ಟ ಕಥೆಗಳು ಧರ್ಮದ ಪ್ರಾಯೋಗಿಕತೆಯನ್ನು ಮನಸ್ಸಿಗಿಳಿಸುವ ಕೆಲಸ ಮಾಡಿದೆ. ಕೆಲವು ಕಥೆಗಳನ್ನು ಕೇಳಿದ್ದೇವೆ, ಆದರೆ ಹೀಗೊಂದು
Suvarnini Konale
ಕೃತಿ: ‘ಜಸ್ಟ್ ೧ ಗಂಟೆ’ ಸರಣಿಯ #ಯಕ್ಷಪ್ರಶ್ನೆ ಲೇಖಕರು: #ಜಗದೀಶಶರ್ಮಾ_ಸಂಪ Jagadisha Sharma Sampa ಪ್ರಕಾಶಕರು: #ಸಾವಣ್ಣ_ಪ್ರಕಾಶನ Jameel Sawanna ನಮ್ಮೊಳಗೆ ಪ್ರಶ್ನೆ ಮೂಡಬೇಕು, ಅಥವಾ ಯಾರಾದರೂ ಪ್ರಶ್ನೆ ಕೇಳಬೇಕು. ಆಗ ನಮ್ಮೊಳಗೊಂದು ಮಂಥನ ಶುರುವಾಗುತ್ತದೆ. ನವನೀತ ತೇಲುತ್ತದೆ. ಅದು ಬದುಕನ್ನು ಹಸನಾಗಿಸುವ ತುಪ್ಪವಾಗುತ್ತದೆ. ಹಾಗೆ ನಮ್ಮೊಳಗೆ ಮೂಡುವ ಅಥವಾ ಬದುಕು ನಮ್ಮೆಡೆಗೆ ಎಸೆಯುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಬದುಕು. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಯೇ ಬಿಡುತ್ತದೆ ಎಂದೇನಿಲ್ಲ. ಕೆಲವು ಸುಲಭವಾಗಿ ಸಿಗಬಹುದು,
ಅಂದಿಗಷ್ಟು; ಇಂದಿಗಿಷ್ಟು
ಜೀವನ ಸುಖದ ಸೋಪಾನವಲ್ಲ. ದುಃಖವೂ ಅದರ ಸಂಗಾತಿಯೇ. ನೋವು ನಲಿವುಗಳೆರಡರ ಅನುಭವಕ್ಕೆಯೇ ಈ ಭವ ರೂಪುಗೊಂಡಿದ್ದು. ಪುಣ್ಯ-ಪಾಪಗಳ ಪರಿಣಾಮವೇ ಈ ಹುಟ್ಟು ತಾನೇ!