ಚುರುಕು-ಚಾವಡಿ | Curuku Cāvaḍi
ಪ್ರಾಚೀನ ಸಾಹಿತ್ಯಗಳು ಹುಟ್ಟಿಕೊಂಡಿದ್ದು ಜಿಜ್ಞಾಸುಗಳಿಂದ. ಒಬ್ಬ ಜಿಜ್ಞಾಸು ತನ್ನನ್ನು, ಸೃಷ್ಟಿಯನ್ನು ಶೋಧಿಸಿದಾಗ ದೊರೆತ ಜ್ಞಾನರಾಶಿಯೇ ಪ್ರಾಚೀನ ಸಾಹಿತ್ಯ. ಋಷಿಗಳ ತಪಸ್ಸೆನ್ನುವ ಪ್ರಶ್ನೆಗೆ ಉತ್ತರ ವೇದ. ಶಿಷ್ಯನ ಪ್ರಶ್ನೆಗೆ ಗುರುವಿನ ಉತ್ತರ ಉಪನಿಷತ್ತು. ಋಷಿಗಳ ಜಿಜ್ಞಾಸೆಗೆ ಮಹರ್ಷಿಗಳ ಉತ್ತರ ಪುರಾಣ. ಹೀಗೆ ಜ್ಞಾನೋದಯವಾಗಿದ್ದು ಪ್ರಶ್ನೋದಯದಿಂದ. ‘ಚುರುಕು ಚಾವಡಿ’ ಧರ್ಮಭಾರತೀ ಮಾಸಪತ್ರಿಕೆಯ ಅಂಕಣ ಬರಹ. ಈ ಕಿರು ಕೃತಿ ಬದುಕಿನಲ್ಲಿ ಬರುವ ಅನೇಕ ಪ್ರಶ್ನೆಗಳಿಗೆ ಚುರುಕಾದ ಉತ್ತರವನ್ನು ನೀಡುತ್ತದೆ. ಆಧುನಿಕ ಕಾಲಕ್ಕೆ ಬೇಕಾದ ತುರ್ತು ಉಪಶಮನವನ್ನು ಮಾತ್ರೆಯಷ್ಟೇ ಪುಟ್ಟದಾದ ಮಾತುಗಳು
ಮಹಾನಂದಿ | Mahanandi (Kannada & English)
ಸಂತಮಹಾನಂದಿಯ ಭೂಮವ್ಯಕ್ತಿತ್ವವನ್ನು ಕಿರಿದಾಗಿ ಹಿಡಿದಿಡುವ ಸಾಹಸವಿದು ಅಲ್ಲಿಗೆ ಸಲ್ಲುವ, ಆದರೆ ಇಲ್ಲಿನವರಿಗಾಗಿ ಇಲ್ಲಿಗೂ, ಕಾಲದ ಮಹಾಭಿಯಾನದ ಕೆಲಸಮಯ ಸಂದ ಚೇತನವದು. ಸಾಮಾನ್ಯ ಕಣ್ಣಿಗೂ ಅಸಾಮಾನ್ಯತೆಯ ಅನುಭವವಾಗದಿದ್ದರೂ ಅರಿವಾಗಿಸಿದ ವ್ಯಕ್ತಿತ್ವವದು. ಪ್ರೇರಣೆಯೊಂದರ ಮೂಲಕ, ಸನ್ನಿಧಿಯ ಇರುವಿಕೆಯ ಮೂಲಕ ಮಹತ್ಕಾರ್ಯವೊಂದನ್ನು ಆಗಮಾಡಿದ ಅನುಪಮತೆಯದು.
ಸಂತ ತ್ರಿವಿಕ್ರಮ | Santa Trivikrama
ಆತ್ಮಸಾಧನೆಗಾಗಿ ತನ್ನನ್ನೇ ಅರ್ಪಿಸಿಕೊಂಡ ಪುಣ್ಯಧರಿತ್ರಿ ಈ ಭರತಭೂಮಿ. ಜೀವಲೋಕದ ಸುಖದ ನೆಲೆಯನ್ನು ಕಂಡು, ಅನುಭವಿಸಿ, ಸುಖದ ಸೀಮೆಯೊಳಗೆ ಎಲ್ಲ ಜೀವಿಗಳನ್ನೂ ಕೊಂಡೊಯ್ಯುವ ನೈಜಜೀವಹಿತದ ಆಕಾಂಕ್ಷೆಯಿಂದ ತಪಸಿರುವುದು ಈ ನೆಲದ ಸಹಜತೆ. ಭಾರತದ ಇತಿಹಾಸವನ್ನು (ನಿಜ ಇತಿಹಾಸವಾದ ಪುರಾಣ, ರಾಮಾಯಣ, ಮಹಾಭಾರತಗಳಿಂದ ಆರಂಭಿಸಿ ನಿನ್ನೆಯವರೆಗಿನ ಘಟನೆಗಳನ್ನು) ಅವಲೋಕಿಸಿದರೆ ಇದೇ ಉದ್ದೇಶಕ್ಕಾಗಿಯೇ ಭಾರತ ಶ್ರಮಿಸಿದೆ ಎನ್ನುವುದು ಸೂರ್ಯಸ್ಪಷ್ಟವಾಗಿ ತಿಳಿಯುತ್ತದೆ. ಭಾರತದ ಈ ಇತಿಹಾಸದ ಅರಿವು ಮತ್ತು ಅವಗಾಹನೆಗಳು; ಕೇವಲ ನಾಡಿನ ಹಿರಿತನದ ಉಕ್ಕೀರ್ತನೆಯಾಗದೇ, ಜಗತ್ತಿನ ಹಿತಕ್ಕೆ ಸಹಕಾರಿಗಳಾಗುತ್ತವೆ; ವ್ಯಕ್ತಿಯ ಉತ್ಕರ್ಷಕ್ಕೆ
ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ | Gōsāmrājyada Anabhiṣikta Samrāṭa Mahānandi
ಸಂತಮಹಾನಂದಿಯ ಭೂಮವ್ಯಕ್ತಿತ್ವವನ್ನು ಕಿರಿದಾಗಿ ಹಿಡಿದಿಡುವ ಸಾಹಸವಿದು ಅಲ್ಲಿಗೆ ಸಲ್ಲುವ, ಆದರೆ ಇಲ್ಲಿನವರಿಗಾಗಿ ಇಲ್ಲಿಗೂ, ಕಾಲದ ಮಹಾಭಿಯಾನದ ಕೆಲಸಮಯ ಸಂದ ಚೇತನವದು. ಸಾಮಾನ್ಯ ಕಣ್ಣಿಗೂ ಅಸಾಮಾನ್ಯತೆಯ ಅನುಭವವಾಗದಿದ್ದರೂ ಅರಿವಾಗಿಸಿದ ವ್ಯಕ್ತಿತ್ವವದು. ಪ್ರೇರಣೆಯೊಂದರ ಮೂಲಕ, ಸನ್ನಿಧಿಯ ಇರುವಿಕೆಯ ಮೂಲಕ ಮಹತ್ಕಾರ್ಯವೊಂದನ್ನು ಆಗಮಾಡಿದ ಅನುಪಮತೆಯದು.
ಸಂಪನಿನಾದ | Sampanināda
ಇದು ವ್ಯಕ್ತಿವಿಶಿಷ್ಟ ಕೃತಿ. ಯಕ್ಷಗಾನದ ಖ್ಯಾತ ಕಲಾವಿದ ಸಂಪ ಲಕ್ಷ್ಮೀನಾರಾಯಣ ಇವರ ಕಲಾ ಪಯಣದ ನಿರೂಪಣೆ.