Mahesha Araballi
Mahesha Araballi

2023/Dec/ಪುಸ್ತಕ-169 ಯಕ್ಷಪ್ರಶ್ನೆ – ಜಗದೀಶಶರ್ಮಾ ಸಂಪ Jagadisha Sharma Sampa ಡಿವೈನ್ ಡಾನ್ ಎಂದೇ ಪ್ರಸಿದ್ಧರಾದ ಜಗದೀಶಶರ್ಮಾ ಸಂಪರವರ “ಜಸ್ಟ್ 1 ಗಂಟೆಯ” ಸೀರೀಸಿನ ಕೃತಿ “ಯಕ್ಷಪ್ರಶ್ನೆ” ಆಸಕ್ತಿಕರವಾಗಿದೆ. ಜೀವಿಯನ್ನು ಮೇಲೆತ್ತುವುದು ಯಾವುದು? ಯಾವುದರಿಂದ ಬುದ್ಧಿವಂತನಾಗುವುದು? ಆಕಾಶಕ್ಕಿಂತ ಎತ್ತರ ಯಾವುದು? ನಿದ್ರೆಯಲ್ಲೂ ಎಚ್ಚರಿರುವುದು ಯಾರು? ಏನನ್ನು ಬಿಟ್ಟರೆ ಸುಖಿಯಾಗಬಹುದು? ಈ ಬಗೆಯ 64 ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸಿದ ಸಂದರ್ಭ, ಪೂರಕವಾದ ಉಪಕಥೆಗಳು ಹಾಗೂ ಝೆನ್ ಕಥೆಗಳು ಈ ಕೃತಿಯಲ್ಲಿವೆ.

Read More
Shridhar Saraf
Shridhar Saraf

ಸದ್ಗುಣ ಮತ್ತು ಸಾಮರ್ಥ್ಯಗಳು ಹೂವಿನ ಪರಿಮಳದಂತೆ. ಅವು ಇದ್ದರೆ ಸಾಕು,ಜನಕ್ಕೆ ತಾನಾಗಿ ತಿಳಿಯುತ್ತದೆ. ಈ ಪುಸ್ತಕದಲ್ಲಿಯ ಹೀಗೊಂದು ವಾಕ್ಯ ಶ್ರೀ Jagadisha Sharma ರ ಸದ್ಗುಣ ಮತ್ತು ಸಾಮರ್ಥ್ಯವನ್ನ ತಾನಾಗಿಯೇ ತಿಳಿಯುವಂತೆ ಮಾಡಿದ ಅನುಭವ ನನಗಾಯ್ತು. ಸಧ್ಯ ಓದುತ್ತಿರುವೆ.

Read More
Ravi Kantha
Ravi Kantha

ಮಹಾಭಾರತದ ನೈಜ‌ ನಾಯಕ ಎನ್ನಲಾದ ವಿದುರ ಅಲ್ಲಿ ಯಾರ ವಿರುದ್ದವೂ ತೊಡೆ ತಟ್ಟಲಿಲ್ಲ, ಅಸ್ತ್ರ ಹೂಡಲಿಲ್ಲ, ಶಸ್ತ್ರ ಹಿಡಿದು ಹೋರಾಡಲಿಲ್ಲ. ಆದರೆ ಮಹಾಭಾರತದುದ್ದಕ್ಕೂ ಆತ ನ್ಯಾಯ-ನೀತಿ ಪರವಾಗಿಯೇ ಇದ್ದ. ಅಷ್ಟೇ ಆಗಿದ್ದಿದ್ದರೆ ಆತ ಪ್ರಸ್ತುತ ಅನಿಸಿರುತ್ತಿರಲಿಲ್ಲವೇನೋ? ಆದರೆ ಆತ ಅಗತ್ಯ ಬಿದ್ದಾಗೆಲ್ಲ ಮಾತಾಡಿದ, ಏನು ಹೇಳಬೇಕಿತ್ತೋ ಅದನ್ನು ಹೇಳಿದ. ಹೇಳಬೇಕಾದ್ದನ್ನು ಹೇಳದೆ ಸುಮ್ಮನಿರಲಿಲ್ಲ. ಆತ ಹೇಳಿದ್ದನ್ನು ಮೊದಮೊದಲು ಒಪ್ಪದವರು ಕೊನೆಯಲ್ಲಾದರೂ ಒಪ್ಪಿದರು. ಕೊನೆಯವರೆಗೂ ಒಪ್ಪದವರು ಅನ್ಯಾಯವಾಗಿ ಸಾವನ್ನಪ್ಪಿದರು. ವಿದುರ ಎರಡೂ ಕಡೆಗೂ ಇದ್ದ, ಕೌರವ-ಪಾಂಡವರಿಬ್ಬರ ಜೊತೆಗೂ ಇದ್ದು

Read More
Naveena Krishna Bhat
Naveena Krishna Bhat

ವಿದುರ – ಜಗದೀಶಶರ್ಮಾ ಸಂಪ ವ್ಯಾಸಋಷಿಪ್ರಣೀತ ಮಹಾಭಾರತದಲ್ಲಿ ಕಂಡುಬರುವ ವಿದುರನ ಪಾತ್ರ ಬಹು ವಿಶಿಷ್ಠವಾದದ್ದು. ಮಹಾಭಾರತ ಕಾಲದ ರಾಜನೀತಿಜ್ಞರಲ್ಲಿ ವಿದುರನನ್ನು ಮೀರಿಸಿದ ಮತ್ತೊಬ್ಬನಿರಲಿಲ್ಲ. ಹಾಗಾಗಿಯೇ ಆತ ಕುರುಕುಲದ ಆಸ್ಥಾನದಲ್ಲಿದ್ದ ಮಹಾ ಮೇಧಾವಿ ಹಾಗೂ ಅಪ್ರತಿಮ ಬುದ್ಧಿಶಾಲಿ. ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಮೃತ್ಯು ದೇವತೆ ಯಮನೇ ವಸುಂಧರೆಯಲ್ಲಿ ವಿದುರನಾಗಿ ಜನಿಸಿ ಕುರುಕುಲದ ಆಧಾರಸ್ತಂಭವಾಗುತ್ತಾನೆ. ಹಲವು ಸಂದರ್ಭಗಳಲ್ಲಿ ವಿದುರನ ವಿವೇಕ ತಣ್ಣೀರನ್ನೂ ತಣಿಸುತ್ತಿತ್ತು! ಇಂತಿಪ್ಪ ವಿದುರನ ಪಾತ್ರ ಚಿತ್ರಣವನ್ನು ಕಟ್ಟಿಕೊಡುವ ಹೊತ್ತಗೆಯೇ ಜಗದೀಶಶರ್ಮಾ ಸಂಪ ಅವರ ‘ವಿದುರ’. ಇಲ್ಲಿರುವುದು ನಾವೆಲ್ಲರೂ

Read More
Mahesha Araballi
Mahesha Araballi

2023/Dec/ಪುಸ್ತಕ-176 ಚಾಣಕ್ಯ ಹೇಳೋದನ್ನ ಕೇಳಿ – ಜಗದೀಶಶರ್ಮಾ ಸಂಪ Jagadisha Sharma Sampa ಚಾಣಕ್ಯ ನೀತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಕೈಪಿಡಿ ಮಾದರಿಯ ಈ ಪುಸ್ತಕವನ್ನು ಆಗಾಗ ಮೆಲುಕು ಹಾಕುತ್ತಿರಬಹುದು. ಕೆಲವು ವಿವರಗಳು ಹೀಗಿವೆ: – ಬಾಲಿಶರು ಕೆಲಸ ಕೆಟ್ಟರೆ ದೋಷಾರೋಪ ಮಾಡುತ್ತಾರೆ – ಅತಿ ಆಸೆ ಬುದ್ಧಿಯನ್ನು ಮುಚ್ಚುತ್ತದೆ – ಹೆದರುವವಗೆ ಕಾರ್ಯದ ಯೋಚನೆ ವ್ಯರ್ಥ – ಕೃತಜ್ಞನಲ್ಲದವನಿಗೆ ನರಕದಿಂದ ಬಿಡುಗಡೆಯಿಲ್ಲ – ಸುಖಕ್ಕೆ ಧರ್ಮವು ಮೂಲ – ಅರ್ಥಕ್ಕೆ ದೇಶವು ಮೂಲ

Read More
ಗುರುರಾಜ ಕೊಡ್ಕಣಿ
ಗುರುರಾಜ ಕೊಡ್ಕಣಿ

ತೀರ ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಜಮೀಲ್ ಸರ್ ಸಿಕ್ಕಿದ್ದರು. ಮಾತಿನ ನಡುವೆ ‘ ಇನ್ನಷ್ಟು ಹೊಸ ಓದುಗರನ್ನ ಕನ್ನಡಕ್ಕೆ ಸೆಳೆಯುವ ಪ್ರಯತ್ನಕ್ಕೆ ಹೊಸದೊಂದು ಯೋಜನೆ ನಿರೂಪಿಸಿದ್ದೀನಿ ಸರ್ ‘ ಎಂದಿದ್ದರು. ಅಂಥದ್ದೇನು ಯೋಜನೆ ಎಂದು ಕುತೂಹಲದಲ್ಲಿದ್ದವನಿಗೆ ಅವರು ತೋರಿಸಿದ್ದು ತಮ್ಮ ಮೊಬೈಲ್ ಪೋನಿನಲ್ಲಿದ್ದ Jagadisha Sharma Sampa ಪುಸ್ತಕದ ಮುಖಪಟಗಳ ಚಿತ್ರ. ‘ ಜಸ್ಟ್ 1 ಗಂಟೆ’ ಎಂಬ ಸರಣಿಯಡಿ ಪ್ರಕಟವಾಗಿರುವ ಆರು ಪುಸ್ತಕಗಳಿವು. ‘ಧರ್ಮ’ ‘ಚಾಣಕ್ಯ’ ‘ಭಗವದ್ಗೀತೆ’ ’24 ಗುರುಗಳು ‘ ‘ಯಕ್ಷಪ್ರಶ್ನೆ’ ‘ ಆತ್ಮಗುಣ’

Read More
Sachin LS
Sachin LS

ಪ್ರೀತಿಯ Jagadisha Sharma Sampa , ಇಡೀ ಜಗತ್ತು ಇದೇ ಧರ್ಮ ಎಂದು ಹೇಳುತ್ತ ಧರ್ಮದ ಕುರಿತು ಮಾಹಿತಿ ಸಾರುವ, ಧರ್ಮದ ಹೆಸರಿನಲ್ಲಿ ಸಮಾಜ ಹೊತ್ತಿ ಉರಿಯುವ ಈ ಸಮಯದಲ್ಲಿ ತಣ್ಣಗೆ ನಿಜ ಧರ್ಮದ ಅರಿವನ್ನು ಮೂಡಿಸಹೊರಟ ಕೃತಿಯಿದು. ಒಂದು ಗಂಟೆಯಲ್ಲಿ ಇಡಿಯ ಜನ್ಮಕ್ಕೆ ಬೇಕಾಗುವಷ್ಟು ಕಲಿಯುವ ಸರಕನ್ನು ನೀಡಿರುವ ಪುಸ್ತಕವಿದು‌. ಧರ್ಮದ ಹತ್ತು ಮೆಟ್ಟಿಲುಗಳನ್ನು ಕಟ್ಟಿಕೊಟ್ಟು, ನಾವೂ ಧರ್ಮವಂತರಾಗಬಹುದಾದ ದಾರಿಯನ್ನು ತೆರೆದಿಟ್ಟಿದ್ದಾರೆ. ಪುಟ್ಟ ಕಥೆಗಳು ಧರ್ಮದ ಪ್ರಾಯೋಗಿಕತೆಯನ್ನು ಮನಸ್ಸಿಗಿಳಿಸುವ ಕೆಲಸ ಮಾಡಿದೆ. ಕೆಲವು ಕಥೆಗಳನ್ನು ಕೇಳಿದ್ದೇವೆ, ಆದರೆ ಹೀಗೊಂದು

Read More
Suvarnini Konale
Suvarnini Konale

ಕೃತಿ: ‘ಜಸ್ಟ್ ೧ ಗಂಟೆ’ ಸರಣಿಯ #ಯಕ್ಷಪ್ರಶ್ನೆ ಲೇಖಕರು: #ಜಗದೀಶಶರ್ಮಾ_ಸಂಪ Jagadisha Sharma Sampa ಪ್ರಕಾಶಕರು: #ಸಾವಣ್ಣ_ಪ್ರಕಾಶನ Jameel Sawanna ನಮ್ಮೊಳಗೆ ಪ್ರಶ್ನೆ ಮೂಡಬೇಕು, ಅಥವಾ ಯಾರಾದರೂ ಪ್ರಶ್ನೆ ಕೇಳಬೇಕು. ಆಗ ನಮ್ಮೊಳಗೊಂದು ಮಂಥನ ಶುರುವಾಗುತ್ತದೆ. ನವನೀತ ತೇಲುತ್ತದೆ. ಅದು ಬದುಕನ್ನು ಹಸನಾಗಿಸುವ ತುಪ್ಪವಾಗುತ್ತದೆ. ಹಾಗೆ ನಮ್ಮೊಳಗೆ ಮೂಡುವ ಅಥವಾ ಬದುಕು ನಮ್ಮೆಡೆಗೆ ಎಸೆಯುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಬದುಕು. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಯೇ ಬಿಡುತ್ತದೆ ಎಂದೇನಿಲ್ಲ. ಕೆಲವು ಸುಲಭವಾಗಿ ಸಿಗಬಹುದು,

Read More